Thursday, September 19, 2024

ಬ್ರಹ್ಮಾವರ: ಬ್ಯಾಂಕ್ ಮ್ಯಾನೇಜರ್ ಹೆಸರಿನಲ್ಲಿ‌ ಮಹಿಳೆಗೆ ಲಕ್ಷಾಂತರ ರೂ. ವಂಚನೆ

Must read

ಬ್ರಹ್ಮಾವರ: ಬ್ಯಾಂಕ್ ಮ್ಯಾನೇಜರ್ ಹೆಸರಿನಲ್ಲಿ‌ ಮಹಿಳೆಯೊಬ್ಬರಿಗೆ ಕರೆ ಮಾಡಿ ಒಟಿಪಿ ಪಡೆದು ಖಾತೆಯಿಂದ ಲಕ್ಷಾಂತರ ರೂ. ದೋಚಿದ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬ್ರಹ್ಮಾವರದ ಸುಶೀಲಾ ಎಂ.(75) ಎಂಬವರು ಹಣ ಕಳೆದುಕೊಂಡ ಮಹಿಳೆ. ಇವರ ಮೊಬೈಲ್‌ಗೆ ನ.15ರಂದು ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ, ತಾನು ಬ್ಯಾಂಕ್ ಮ್ಯಾನೇಜರ್, ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಪಟ್ಟು ನಿಮ್ಮ ಕೆವೈಸಿ ಅಪ್‌ಡೇಟ್ ಮಾಡಲು ಬಾಕಿ ಇದೆ ಎಂದು ಹೇಳಿದ್ದನು.

ಇದನ್ನು ನಂಬಿದ ಸುಶೀಲಾ ಓಟಿಪಿಯನ್ನು ನೀಡಿದ್ದು, ಅದನ್ನು ಬಳಸಿ ಅಪರಿಚಿತ ವ್ಯಕ್ತಿ ಸುಶೀಲಾ ಅವರ ಖಾತೆಯಿಂದ ಒಟ್ಟು 2,82,000ರೂ. ಹಣವನ್ನು ಮೋಸದಿಂದ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

spot_img

More articles

LEAVE A REPLY

Please enter your comment!
Please enter your name here