Tuesday, September 17, 2024

ಉಡುಪಿ: ಅ. 29ರಂದು ಸಾಧಕ ಕ್ರೈಸ್ತ ಉದ್ಯಮಿಗಳಿಗೆ ಪ್ರೇರಣಾ ಪ್ರಶಸ್ತಿ ಪ್ರದಾನ

Must read

ಉಡುಪಿ: ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ (ಕೆಸಿಸಿಸಿಐ) ಇದರ ಆಶ್ರಯದಲ್ಲಿ ಇದೇ ಅ. 29ರಂದು ಕಡಿಯಾಳಿಯ ಮಾಂಡವಿ ಸಭಾಭವನದಲ್ಲಿ ಕ್ರೈಸ್ತ ಉದ್ಯಮಿಗಳಿಗೆ ‘ಪ್ರೇರಣಾ ಪ್ರಶಸ್ತಿ- 2023’ ವಿತರಣಾ ಸಮಾರಂಭ ನಡೆಯಲಿದೆ.

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೆಸಿಸಿಸಿಐ ಸ್ಥಾಪಕಾಧ್ಯಕ್ಷ ಜೆರ್ರಿ ವಿನ್ಸೆಂಟ್ ಡಯಾಸ್ ಅವರು, ಉದ್ಯಮಿಗಳಾದ ರಾಜೇಶ್ ಕುಮಾರ್ ಸಾಲಿನ್ಸ್, ಕೆರೋಲ್ ವಿಲ್ಮಾ ಡಿ’ಕುನ್ಹಾ, ನಿಯೋನ್ಸ್ ಆಂತೋನಿ ಡಿ’ಸೋಜ, ವಿಲ್ಫ್ರೆಡ್‌ ಫೆಲಿಕ್ಸ್‌ ಡಿ’ಸೋಜ ಅವರಿಗೆ ಪ್ರೇರಣಾ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಪ್ರೇರಣಾ ವಿಶೇಷ ಪ್ರಶಸ್ತಿಯನ್ನು ಡೇವಿಡ್ ವಿ. ಸಿಕ್ವೇರಾ, ಗ್ಲೆನ್ ಲಾರ್ಸನ್ ರೆಬೆಲ್ಲೊ ಮೂಡುಬೆಳ್ಳೆ, ಲಾರೆನ್ಸ್ ಆಳ್ವ ಮೂಡುಬೆಳ್ಳೆ ಅವರಿಗೆ ನೀಡಲಾಗುವುದು. ಹಾಗೆ, ಮ್ಯೂರಿಯಲ್ ಪ್ರೇಮಲತಾ ಹಾಗೂ ರುಫಿನಾ ಮಂಡೋನ್ಸಾ ಅವರಿಗೆ ಪ್ರೇರಣಾ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಸಿಸಿಸಿಐ ಅಧ್ಯಕ್ಷ ಸಂತೋಷ್ ಡಿಸಿಲ್ವಾ, ಕಾರ್ಯದರ್ಶಿ ಆಲ್ವಿನ್ ಕ್ವಾಡ್ರಸ್, ಪದಾಧಿಕಾರಿಗಳಾದ ಜಿತೇಂದ್ರ ಫುರ್ಟಾಡೊ, ಲೂಯಿಸ್ ಲೋಬೊ ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here