Friday, September 20, 2024

ರಾಜ್ಯ ಕಾಂಗ್ರೆಸ್ ಸರ್ವ ಜನರ ಸರ್ಕಾರ ಅಲ್ಲ, ಒಂದು ಕೋಮಿನ ಸರ್ಕಾರ: ಶಾಸಕ ಸುನೀಲ್ ಕುಮಾರ್ ವಾಗ್ದಾಳಿ

Must read

ಉಡುಪಿ: ರಾಜ್ಯ ಕಾಂಗ್ರೆಸ್ ಸರ್ವ ಜನರ ಸರ್ಕಾರ ಅಲ್ಲ, ಇದೊಂದು ರೈತ ವಿರೋಧಿ, ಕನ್ನಡ ವಿರೋಧಿ ಒಂದು ಕೋಮಿನ ಸರ್ಕಾರವಾಗಿದೆ ಶಾಸಕ ಸುನೀಲ್ ಕುಮಾರ್ ಆರೋಪಿಸಿದರು.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಅನುದಾನಗಳನ್ನು ಬೇರೆ ಕಡೆ ಬಳಸಿದ ದಲಿತ ವಿರೋಧಿ ಸರಕಾರ. ರಾಜ್ಯದಲ್ಲಿ ಒಂದು ಕೋಮಿಗೆ ಬೇಕಾದ ಮತ್ತು ಅನುದಾನ ನೀಡುವ ಸರ್ಕಾರ ಇದೆ ಎಂದು ವಾಗ್ದಾಳಿ ನಡೆಸಿದ್ರು.

ಜ.8ಕ್ಕೆ ವಿಜಯ ಸಿದ್ಧತಾ ಸಭೆ:
ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ದೊಡ್ಡ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಜನವರಿ 8ಕ್ಕೆ ಬೆಂಗಳೂರಿನಲ್ಲಿ ವಿಜಯ ಸಿದ್ಧತಾ ಸಭೆ ನಡೆಯಲಿದೆ. ಕರ್ನಾಟಕದ 28 ಕ್ಷೇತ್ರವನ್ನು ಗೆಲ್ಲುವ ವಿಜಯ ಸಿದ್ಧತಾ ಸಭೆ ಇಟ್ಟುಕೊಂಡಿದ್ದೇವೆ. ಈ ಸಭೆಯಲ್ಲಿ ಬಿಜೆಪಿ ಚುನಾವಣಾ ಕಾರ್ಯತಂತ್ರ ರೂಪಿಸುತ್ತೇವೆ. ರಾಜ್ಯ ಸರಕಾರದ ಮುಖವಾಣಿ ಭ್ರಷ್ಟಾಚಾರ. ಸರಕಾರದ ಹಿಂದು ವಿರೋಧಿ ನೀತಿಯನ್ನು ಜನರ ಮನೆಗೆ ತಲುಪಿಸುತ್ತೇವೆ. ಕೇಂದ್ರದ ಯೋಜನೆಯನ್ನು ಮತವಾಗಿ ಪರಿವರ್ತಿಸುವ ಕಾರ್ಯತಂತ್ರ ನಡೆಸುತ್ತೇವೆ ಎಂದರು.

spot_img

More articles

LEAVE A REPLY

Please enter your comment!
Please enter your name here