Sunday, August 30, 2026

ಸಮಾಜಮುಖಿ ಚಿಂತನೆಯಿಂದ ದೇಶದ ಅಭಿವೃದ್ಧಿ ಸಾಧ್ಯ: ಪ್ರಸಾದ್ ರಾಜ್ ಕಾಂಚನ್

Must read

ಉಡುಪಿ: ಉದ್ಯಮಿಗಳು ಸಮಾಜಮುಖಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದರೆ ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಮಹಾರುದ್ರಯಾಗ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಹೇಳಿದರು.
ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಆಯೋಜಿಸಿದ್ದ ಮಹಾರುದ್ರಯಾಗದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಎಲ್ಲವನ್ನೂ ಸರ್ಕಾರದಿಂದ ಮಾಡಲು ಸಾಧ್ಯವಿಲ್ಲ. ಹೀಗಾಗಿ ನನ್ನಂತಹ ಉದ್ಯಮಿಗಳು ಸಮಾಜಮುಖಿ ಚಿಂತನೆ ಬೆಳೆಸಿಕೊಂಡು ಸಾಮಾಜಿಕ ಕಾರ್ಯಗಳನ್ನು ಹೆಚ್ಚೆಚ್ಚು ಕೈಗೊಳ್ಳಬೇಕು. ಧಾರ್ಮಿಕತೆಯ ಜೊತೆಗೆ ಮಕ್ಕಳಲ್ಲಿ ಸಾಮಾಜಿಕ ಕಲ್ಪನೆ ಮತ್ತು ಸೇವಾಭಾವನೆ ಬೆಳೆಸಬೇಕಿದೆ ಎಂದರು.
ಮಹಾರುದ್ರಯಾಗದ ಅಂಗವಾಗಿ ಉದ್ಯೋಗ ಮೇಳ, ಆರೋಗ್ಯ ಮೇಳದಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿರುವುದಾಗಿ ತಿಳಿಸಿದ ಅವರು, ದೇವರು ಪ್ರೇರಣೆ ನೀಡಿದರೆ ಯಾವುದೇ ಕಾರ್ಯವೂ ಸುಗಮವಾಗಿ ಈಡೇರುತ್ತದೆ ಎನ್ನುವುದಕ್ಕೆ ಈ ಮಹಾರುದ್ರಯಾಗವೇ ಸಾಕ್ಷಿ. ಯಾವುದೇ ಅಡಚಣೆ ಇಲ್ಲದೆ ಈ ಮಹಾಕಾರ್ಯ ಯಶಸ್ವಿಯಾಗಿ ನೆರವೇರಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ಕಿದಿಯೂರು ಹೋಟೆಲ್ ಪ್ರೈವೇಟ್ ಲಿಮಿಟೆಡ್ ಪ್ರವರ್ತಕ ಭುವನೇಂದ್ರ ಕಿದಿಯೂರು, ಉದ್ಯಮಿ ಮನೋಹರ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಸುಧಾಕರ್ ಶೆಟ್ಟಿ ಮೈರ್ಮಾಡಿ, ಭುಜಂಗ ಶೆಟ್ಟಿ, ಹರಿಪ್ರಸಾದ್ ಐತಾಳ್, ಮೀನಾಕ್ಷಿ ಮಾಧವ ಬನ್ನಂಜೆ, ಆಶಾ ಚಂದ್ರಶೇಖರ್, ರತ್ನಾಕರ ಸಾಲಿಯಾನ್, ದಯೇಶ್ ಕಾಂಚನ್, ಸುರೇಂದ್ರ ಕುಂದರ್, ರವಿ ಕರ್ಕೇರ, ಸುಧಾಕರ್ ಎ ಕುಂದರ್, ವಿಠಲ ಕರ್ಕೇರ, ಕಿರಣ್ ಕುಮಾರ್, ರತನ್, ಸುಧಾಕರ್ ಕಲ್ಮಾಡಿ, ರಾಮಚಂದ್ರ ಕೋಟ್ಯಾನ್, ಶರತ್ ಕುಮಾರ್, ದಾಮೋದರ, ಅಶೋಕ್ ಕುಂದರ್, ಗಣೇಶ್ ಅಮೀನ್, ಹರೀಶ್ ಕುಮಾರ್, ಸುರೇಶ್ ಅಮೀನ್, ದಯಾಕರ್ ಎ ಸುವರ್ಣ, ದಿವ್ಯಾರಾಣಿ, ಪ್ರದೀಪ್ ಶೆಟ್ಟಿ, ಕೆ. ಕೃಷ್ಣಮೂರ್ತಿ ಆಚಾರ್ಯ, ತಾರಾನಾಥ ಪೂಜಾರಿ, ಪ್ರಕಾಶ್ ಜಿ. ಕೊಡವೂರು ಮೊದಲಾದವರು‌ ಉಪಸ್ಥಿತರಿದ್ದರು.
ಸಹ ಸಂಚಾಲಕ ಬಾಲಕೃಷ್ಣ ಕೊಡವೂರು ಸ್ವಾಗತಿಸಿದರು. ನಂದಕಿಶೋರ್ ಮತ್ತು ದಯಾನಂದ ಕಾರ್ಯಕ್ರಮ ನಿರೂಪಿಸಿದರು.

spot_img

More articles

LEAVE A REPLY

Please enter your comment!
Please enter your name here