Tuesday, September 17, 2024

ಮಣಿಪಾಲ: ಕಾರಿನಲ್ಲೇ ಉಸಿರುಗಟ್ಟಿ ಕಾರು ಚಾಲಕ ಮೃತ್ಯು

Must read

ಉಡುಪಿ: ಕಾರಿನಲ್ಲೇ ಉಸಿರುಗಟ್ಟಿ ಕಾರು ಚಾಲಕನೋರ್ವ ಮೃತಪಟ್ಟ ಘಟನೆ ಮಣಿಪಾಲದಲ್ಲಿ ನಡೆದಿದೆ.

ಮೃತ ಚಾಲಕನನ್ನು ಚಿಕ್ಕಮಗಳೂರು ಮೂಲದ ಆನಂದ (37) ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರಿನ ಗುರುರಾಜ್ ಎಂಬವರು ಆ.14ರಂದು ರಾತ್ರಿ ಆನಂದ ಅವರ ಕಾರಿನಲ್ಲಿ ತನ್ನ ತಂದೆಯನ್ನು ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆತಂದಿದ್ದರು.

ಗುರುರಾಜ್ ಅವರ ತಂದೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆ ಬಳಿಕ ಚಾಲಕ ಆನಂದ ಅವರು ಕೆಎಂಸಿ ಆಸ್ಪತ್ರೆಯ ಪಾರ್ಕಿಂಗ್‌ ಸ್ಥಳದಲ್ಲಿ ಪಾರ್ಕ್ ಮಾಡಿ ಕಾರಿನಲ್ಲೇ ಮಲಗಿದ್ದರು. ಆ.15ರಂದು ಬೆಳಿಗ್ಗೆ ನೋಡುವಾಗ ಆನಂದ‌ ಅವರು ಕಾರಿನಲ್ಲೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

spot_img

More articles

LEAVE A REPLY

Please enter your comment!
Please enter your name here