Thursday, September 19, 2024

ಶಬರಿಮಲೆಯಲ್ಲಿ ನಾಪತ್ತೆಯಾಗಿದ್ದ ಕಾರ್ಕಳದ ಅಯ್ಯಪ್ಪ ಮಾಲಾಧಾರಿ ಪತ್ತೆ

Must read

ಕಾರ್ಕಳ: ಶಬರಿಮಲೆಯಲ್ಲಿ ವಿಪರೀತ ಜನಸಂದಣಿಯಿಂದಾಗಿ ನಾಪತ್ತೆಯಾಗಿದ್ದ ಅಯ್ಯಪ್ಪ ಮಾಲಾಧಾರಿ ಆದಿತ್ಯ ಶೆಟ್ಟಿಗಾ‌ರ್ ಎಂಬವರು ಇದೀಗ ಪತ್ತೆಯಾಗಿದ್ದು, ಊರಿನತ್ತ ಮರಳಿ ಬರುತ್ತಿದ್ದಾರೆ ಎಂದು ಜೋಗಿನಕೆರೆ ಅಯ್ಯಪ್ಪ ಸೇವಾ ಸಮಿತಿಯ ಗುರು ಸ್ವಾಮಿ ಖಚಿತಪಡಿಸಿದ್ದಾರೆ.

ಅವರು ಕಾರ್ಕಳ ಜೋಗಿನಕೆರೆ ಅಯ್ಯಪ್ಪ ಶಿಬಿರದಿಂದ ಶಬರಿಮಲೆಗೆ ತೆರಳಿದ್ದರು. ಅಯ್ಯಪ್ಪನ ದರ್ಶನ ಪಡೆದು ಮರಳಿ ಬರುವಾಗ ಶಬರಿಮಲೆಯಲ್ಲಿ ಭಕ್ತಾದಿಗಳ ದಟ್ಟಣೆಯಿಂದ ಆದಿತ್ಯ ಶೆಟ್ಟಿಗಾ‌ರ್ ಪಂಪೆಯಲ್ಲಿ ತನ್ನ ತಂಡದಿಂದ ಬೇರ್ಪಟ್ಟು ನಾಪತ್ತೆಯಾಗಿದ್ದರು. ಇದೀಗ ಕಾಣೆಯಾದ ಆದಿತ್ಯ ಶೆಟ್ಟಿಗಾ‌ರ್ ಮತ್ತೆ ಪತ್ತೆಯಾಗಿದ್ದಾರೆ. ಆದಿತ್ಯ ನಾಪತ್ತೆದಿಂದ ಕಂಗಾಲಾಗಿದ್ದ ಅವರ ಪೋಷಕರು ಹಾಗೂ ಸಂಬಂಧಿಕರು ನಿಟ್ಟುಸಿರು ಬಿಡುವಂತಾಗಿದೆ.

spot_img

More articles

LEAVE A REPLY

Please enter your comment!
Please enter your name here