Thursday, September 19, 2024

ಬೈಂದೂರು: ತಲವಾರು ತೋರಿಸಿ ಕೊಟ್ಟಿಗೆಯಲ್ಲಿದ್ದ ಮೂರು ದನಗಳನ್ನು ಕಳವುಗೈದ ದುಷ್ಕರ್ಮಿಗಳ ತಂಡ

Must read

ಉಡುಪಿ: ನಾಲ್ಕೈದು ಮಂದಿಯ ತಂಡವೊಂದು ತಲವಾರು ಝಳಪಿಸಿ ಮನೆಯವರನ್ನು ಹೆದರಿಸಿ, ಮನೆಯ ಕೊಟ್ಟಿಗೆಯಲ್ಲಿದ್ದ ಮೂರು ದನಗಳನ್ನು ಕಳವು ಮಾಡಿರುವ ಘಟನೆ ಬೈಂದೂರು ತಾಲೂಕಿನ ಯಡ್ತರೆ ಎಂಬಲ್ಲಿ ನಡೆದಿದೆ.

ಯಡ್ತರೆ ನಿವಾಸಿ ಸತೀಶ್ ಎಂಬವರ ಮನೆಯ ಕೊಟ್ಟಿಗೆಗೆ ನುಗ್ಗಿದ ನಾಲ್ಕೈದು ಮಂದಿ ತಲವಾರು ಝಳಪಿಸಿದ್ದಾರೆ. ಇದರಿಂದ ಸತೀಶ್ ಹೆದರಿ ಮನೆಯ ಒಳಗಡೆ ಹೋಗಿ ಬಾಗಿಲು ಹಾಕಿ ಮಲಗಿಕೊಂಡಿದ್ದರು. ಆ ಬಳಿಕ ದುಷ್ಕರ್ಮಿಗಳ ತಂಡವು ಸತೀಶ್ ಹಾಗೂ ಭರತ್ ಅವರ ಕೊಟ್ಟಿಗೆಯಲ್ಲಿದ್ದ ಒಟ್ಟು ಮೂರು ದನಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

spot_img

More articles

LEAVE A REPLY

Please enter your comment!
Please enter your name here