Thursday, September 19, 2024

ಫೆ.11ರಂದು ಮಣಿಪಾಲದಲ್ಲಿ ವಾಗ್ಮಿ ಬಿ.ಕೆ. ಶಿವಾನಿ ಅವರಿಂದ ಪ್ರೇರಣಾತ್ಮಕ ಪ್ರವಚನ

Must read

ಉಡುಪಿ: ಬ್ರಹ್ಮಾಕುಮಾರೀಸ್ ಮಣಿಪಾಲ ಸೇವಾಕೇಂದ್ರದ ವತಿಯಿಂದ ಇದೇ ಫೆ.11ರಂದು ಸಂಜೆ 6ಗಂಟೆಯಿಂದ 8ಗಂಟೆಯವರೆಗೆ ಮಣಿಪಾಲದ ಎಂಜೆಸಿ ಮೈದಾನದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ಪ್ರಖ್ಯಾತ ವಾಗ್ಮಿ ಬಿ.ಕೆ. ಶಿವಾನಿ ಅವರಿಂದ ಪ್ರೇರಣಾತ್ಮಕ ಪ್ರವಚನ ಕಾರ್ಯಕ್ರಮ ನಡೆಯಲಿದೆ ಎಂದು ಬ್ರಹ್ಮಾಕುಮಾರೀಸ್ ಮಣಿಪಾಲ ಸೇವಾಕೇಂದ್ರದ ಸಂಚಾಲಕಿ ಬಿ.ಕೆ. ಸೌರಭ ಹೇಳಿದರು.

ಮಣಿಪಾಲದ ಬ್ರಹ್ಮಾಕುಮಾರೀಸ್ ಸೇವಾಕೇಂದ್ರದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರವಚನ ಕಾರ್ಯಕ್ರಮದಲ್ಲಿ 5 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಪ್ರವೇಶ ಉಚಿತವಾಗಿದ್ದು, ನೋಂದಣಿ ಕಡ್ಡಾಯವಾಗಿದೆ ಎಂದರು.

ಶಿವಾನಿಯವರು ಸರಳ, ಪರಿಣಾಮಕಾರಿ ಹಾಗೂ ಮಧುರ ನುಡಿಗಳಿಂದ ಪಾಲ್ಗೊಂಡ ಸಭಿಕರ ಮನೋ ಶಕ್ತಿಯನ್ನು ಹೆಚ್ಚಿಸಲಿದ್ದಾರೆ. ಸದಾ ಸಂತೋಷವಾಗಿರಲು ಸರಳ ಸೂತ್ರಗಳನ್ನು ಚಮತ್ಕಾರಿಕ ಧಾಟಿಯಲ್ಲಿ ತಿಳಿಸಿ ಜೀವನದಲ್ಲಿ ಸಕಾರಾತ್ಮಕ ಪರಿವರ್ತನೆಗೆ ಪ್ರೇರಣೆ ನೀಡಲಿದ್ದಾರೆ. ಅಲ್ಲದೆ, ರಾಜಯೋಗ ಧ್ಯಾನ ಮಾಡುವ ಸುಲಭ ವಿಧಾನವನ್ನು ವಿವರಿಸಿ ತೋರಿಸಿ ಕೊಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಶಿಕ್ಷಕಿ ಬಿ.ಕೆ. ಸುಜಾತ ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here