ಉಡುಪಿ: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯ ಶುಭಸಂದರ್ಭದಲ್ಲಿ ಉಡುಪಿ ಪೇಜಾವರ ಮಠದಲ್ಲಿ ಕಡಿಯಾಳಿ ಮಾತೃಮಂಡಳಿ ಸದಸ್ಯೆಯರಿಂದ ವಿಶೇಷ ಭಜನೆ ನಡೆಯಿತು.
ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಭಾವಚಿತ್ರ ಪಾದುಕೆಗಳಿಗೆ ಮಂಗಳಾರತಿ ಬೆಳಗಲಾಯಿತು. ಬಳಿಕ ಪೇಜಾವರ ಮಠದ ವತಿಯಿಂದ ರಥಬೀದಿಯ ಎಲ್ಲ ವ್ಯಾಪಾರಿಗಳಿಗೆ, ಎರಡು ಸಾವಿರಕ್ಕೂ ಅಧಿಕ ಭಕ್ತರಿಗೆ ಲಡ್ಡು ಹಂಚಲಾಯಿತು. ಮಠದ ಸಿಇಒ ಸುಬ್ರಹ್ಮಣ್ಯ ಭಟ್ , ವ್ಯವಸ್ಥಾಪಕ ಇಂದುಶೇಖರ, ಕೊಟ್ಟಾರಿ ಸಂತೋಷ್ ಭಟ್, ವಾಸುದೇವ ಭಟ್ ಪೆರಂಪಳ್ಳಿ, ಸುಬ್ರಹ್ಮಣ್ಯ ಹೆಬ್ಬಾರ್, ರಾಘವೇಂದ್ರ ಭಟ್ ಮೊದಲಾದವರು ಉಪಸ್ಥಿತರಿದ್ದರು