Friday, September 20, 2024

ಸುಬ್ರಹ್ಮಣ್ಯ ಮಠಕ್ಕೆ ಭಾವಿ ಪರ್ಯಾಯ ಪುತ್ತಿಗೆ ಉಭಯ ಶ್ರೀಪಾದರು ಭೇಟಿ; ದೇವರ ದರ್ಶನ

Must read

ಉಡುಪಿ: ಲೋಕ‌ ಸಂಚಾರ ಪೂರೈಸಿರುವ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಸುಶ್ರೀಂದ್ರತೀರ್ಥ ಶ್ರೀಪಾದರು ಸ್ಥಳೀಯ ಧಾರ್ಮಿಕ, ತೀರ್ಥಕ್ಷೇತ್ರಗಳ ಸಂಚಾರ ಆರಂಭಿಸಿದ್ದಾರೆ. ಇದರ ಅಂಗವಾಗಿ ಮಂಗಳವಾರ ಕುಕ್ಕೆ ಸುಬ್ರಹ್ಮಣ್ಯ ಮಠಕ್ಕೆ ಭೇಟಿ ನೀಡಿ ಉಭಯ ಶ್ರೀಪಾದರು ದೇವರ ದರ್ಶನ ಪಡೆದರು.


ಭಾವಿ ಪರ್ಯಾಯ ಪೀಠಾಧೀಶರಾದ ಶ್ರೀ ಸುಗುಣೇoದ್ರತೀರ್ಥ ಶ್ರೀಪಾದರು ಹಾಗೂ ಶಿಷ್ಯರಾದ ಸುಶ್ರೀoದ್ರತೀರ್ಥ ಶ್ರೀಪಾದರನ್ನು ದೇಗುಲದ ವತಿಯಿಂದ ಸಾಂಪ್ರದಾಯಿಕ ಗೌರವಗಳೊಂದಿಗೆ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.


ಆ ಬಳಿಕ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಷೇತ್ರದ ವಿಷ್ಣುತೀರ್ಥ ಸಂಸ್ಥಾನ ಸುಬ್ರಮಣ್ಯ ಮಠದಲ್ಲಿ ಭಾವಿ ಪರ್ಯಾಯ ಪುತ್ತಿಗೆ ಉಭಯ ಶ್ರೀಪಾದರಿಂದ ರಾತ್ರಿ ಪೂಜೆ ನೆರವೇರಿತು. ಸುಬ್ರಮಣ್ಯ ಮಠಾಧೀಶರಾದ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here