Friday, September 20, 2024

ಉಡುಪಿ: ಆರೋಗ್ಯಾಧಿಕಾರಿಗಳ ದಿಢೀರ್ ದಾಳಿ; ನಕಲಿ ವೈದ್ಯನ ದಂಧೆ ಬಟಾಬಯಲು

Must read

ಉಡುಪಿ: ರಾಜ್ಯದಲ್ಲಿ ಭ್ರೂಣ ಹತ್ಯೆ ಕೇಸ್ ಪತ್ತೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಆರೋಗ್ಯಾಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ನಕಲಿ ವೈದ್ಯರ ದಂಧೆ ಬೆಳಕಿಗೆ ಬಂದಿದ್ದು, ಕೆಲವು ನಕಲಿ ವೈದ್ಯರ ಅಸಲಿ ಮುಖ ಬಯಲಾಗಿದೆ.


ಬ್ರಹ್ಮಾವರ ತಾಲೂಕಿನ ಕುಂಜಾಲಿನಲ್ಲಿ ಆಯುರ್ವೇದಿಕ್, ಅಲೋಪತಿ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯನ ಅಸಲಿಯತ್ತು ಬಯಲಾಗಿದೆ. ಕಂಬಳಗದ್ದೆ ಕ್ರಾಸ್ ನ ಕುಂಜಾಲಿನಲ್ಲಿ ಶ್ರೀಸೂರ್ಯನಾರಾಯಣ ಸ್ವಾಮಿ ಹೆಸರಿನ ಆಯುರ್ವೇದಿಕ್ ಕ್ಲಿನಿಕ್ ನಡೆಸುತ್ತಿದ್ದ ಸಂದೇಶ್ ರಾವ್ ಎಂಬಾತನೇ ಈ ನಕಲಿ‌ ವೈದ್ಯ.

ಈತ ಬಿಕಾಂ ಪದವೀಧರನಾಗಿದ್ದು, ಆಯುರ್ವೇದಿಕ್, ಅಲೋಪತಿಗೂ ಚಿಕಿತ್ಸೆ ನೀಡುತ್ತಿದ್ದ ವಿಚಾರ ದಾಳಿ ವೇಳೆ ಬಯಲಾಗಿದೆ. ಈತ ನಕಲಿ ವೈದ್ಯ ಎಂಬುವುದು ಗೊತ್ತಾಗುತ್ತಿದ್ದಂತೆ ಅಧಿಕಾರಿಗಳು ಈತನ ಆಯುರ್ವೇದಿಕ್ ಸೆಂಟರ್ ಗೆ ಬೀಗ ಜಡಿದು ಸೀಝ್ ಮಾಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

spot_img

More articles

LEAVE A REPLY

Please enter your comment!
Please enter your name here