Friday, September 20, 2024

ಪಡುಕುಡೂರು: ಸಿಮೆಂಟ್ ಮಿಕ್ಸರ್ ವಾಹನದ ಚಕ್ರದಡಿಗೆ ಸಿಲುಕಿ ಸೂಪರ್ ವೈಸರ್ ಮೃತ್ಯು

Must read

ಉಡುಪಿ: ಸಿಮೆಂಟ್ ಮಿಕ್ಸರ್ ವಾಹನದ ಚಕ್ರದಡಿಗೆ ಸಿಲುಕಿ ಸೂಪರ್ ವೈಸರ್ ಓರ್ವರು ಮೃತಪಟ್ಟ ಘಟನೆ ಪಡುಕುಡೂರು ಗ್ರಾಮದಲ್ಲಿ ನಡೆದಿದೆ.

ಹೊರರಾಜ್ಯದ ಭಾಷಿ ವೈ ಎಂಬುವರು ಮೃತದುರ್ದೈವಿ. ಕುಂದಾಪುರ ಮೂಲದ ಗುತ್ತಿಗೆದಾರರಿಂದ ಪಡುಕುಡೂರು ಗ್ರಾಮದ ಕೊಡಮಣಿತ್ತಾಯ ದೇವಸ್ಥಾನವರೆಗಿನ ಮುಖ್ಯರಸ್ತೆಯ ಕಾಮಗಾರಿ ನಡೆಯುತ್ತಿದ್ದು, ಫೆ.14ರಂದು ಸಂಜೆ ವೇಳೆ ನೋಂದಣಿಯಾಗದ ಹೊಸ ಸಿಮೆಂಟ್ ಮಿಕ್ಸರ್ ವಾಹನದ ಚಾಲಕ ಸಂಜು ಶರಣಪ್ಪ ಎಂಬಾತ ಅತೀ ವೇಗವಾಗಿ ನಿರ್ಲಕ್ಷ್ಯತನದಿಂದ ಒಮ್ಮೇಲೆ ವಾಹನವನ್ನು ಹಿಂದಕ್ಕೆ ಚಲಾಯಿಸಿದ ಪರಿಣಾಮ ರಸ್ತೆಯಲ್ಲಿ ನಿಂತಿದ್ದ ಕಂಪನಿಯ ಸೂಪರವೈಸರ್‌ ಭಾಷಿ ವೈ ಎನ್ನುವವರಿಗೆ ಡಿಕ್ಕಿ ಹೊಡೆದಿದೆ.

ವಾಹನದ ಚಕ್ರ ಅವರ ಮೈಮೇಲೆ ಹರಿದ ಪರಿಣಾಮ ಭಾಷಿ ವೈ ಗಂಭೀರ ಗಾಯಗೊಂಡಿದ್ದರು. ಕೂಡಲೇ ಗಾಯಾಳುವನ್ನು ಹೆಬ್ರಿ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ದಾರಿ ಮಧ್ಯೆಯೇ ಭಾಷಿ ವೈ ಅವರು ಕೊನೆಯುಸಿರೆಳೆದಿದ್ದಾರೆ.ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

spot_img

More articles

LEAVE A REPLY

Please enter your comment!
Please enter your name here