Friday, September 20, 2024

ಉಡುಪಿ ಪೇಜಾವರ ಮಠದಲ್ಲಿ ಶ್ರೀ ವಿಶ್ವೇಶತೀರ್ಥ ಸಂಸ್ಮರಣೆ

Must read

ಉಡುಪಿ: ಪೇಜಾವರ ಶ್ರೀ ಕೀರ್ತಿಶೇಷ ಪದ್ಮವಿಭೂಷಣ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಚತುರ್ಥ ಆರಾಧನೋತ್ಸವದ ಪ್ರಯುಕ್ತ ಉಡುಪಿ ಪೇಜಾವರ ಮಠದಲ್ಲಿ ಭಾನುವಾರ ಗುರುಸಂಸ್ಮರಣಾ ಲಾರ್ಯಕ್ರಮ ನೆರವೇರಿತು .

ಶ್ರೀ ಪಲಿಮಾರು ಮಠಾಧೀಶಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ದಿವ್ಯಸಾನ್ನನಿಧ್ಯವಹಿಸಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ದಿವ್ಯ ಪಾದುಕೆ ಮತ್ತು ಸಾಲಂಕೃತ ಭಾವಚಿತ್ರಕ್ಕೆ ಮಂಗಳಾರತಿ ಬೆಳಗಿದರು .
ಈ ಸಂದರ್ಭ ಸಂಸ್ಮರಣ ಸಂದೇಶ ನೀಡಿದ ಶ್ರೀ ವಿದ್ಯಾರಾಜೇಶ್ವರತೀರ್ಥರು ಶ್ರೀಗಳು ಪರಮಕಾರುಣ್ಯಮೂರ್ತಿಯಾಗಿದ್ದು ಸಜ್ಜನ ಮತ್ತು ವಿದ್ವತ್ಪಕ್ಷಪಾತಿಯಾಗಿದ್ದರು ‌. ಕಿರಿಯರು ಹಿರಿಯರ ಮೇಲೆ ಏಕ‌ಪ್ರಕಾರದ ಪ್ರೀತಿ ಅಭಿಮಾನಗಳನ್ನು ಧಾರೆಯೆರೆದಿರುವುದಕ್ಕೆ ತಾನೇ ಸಾಕ್ಷಿ ಎಂದರು.

ಶ್ರೀ ವಿದ್ಯಾಧೀಶತೀರ್ಥರು ಮಾತನಾಡಿ ಶ್ರೀಗಳು ನಡೆಸಿದ ಲೋಕೋತ್ತರ ಕಾರ್ಯಗಳು ಮತ್ತು ಆ ನೆಲೆಯಲ್ಲೇ ಪಡೆದ ಅಪಾರ ಮನ್ನಣೆಗಳನ್ನು ಸ್ಮರಿಸಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಹಿಂದೆ ಅವರ ದೂರದೃಷ್ಟಿ ಮತ್ತು ಕ್ರತುಶಕ್ತಿಯ ಪರಿಣಾಮ ಭವ್ಯ ರಾಮಂಮದಿರ ನಿರ್ಮಾಣದ ದಿವ್ಯವಸಂದರ್ಭವನ್ನು ದೇಶಕ್ಕೆ ತಂದುಕೊಟ್ಟಿದೆ . ಅಙಥಹ ಮಹಾನುಭಾವರ ಸ್ಮರಣೆ ಅತ್ಯಂತ ಶ್ರೇಯಸ್ಕರ ಎಂದು ತಿಳಿಸಿ ಹತ್ತು ಬಾರಿ ರಾಮತಾರಕ ಮಂತ್ರವನ್ಜು ಸಾಮೂಹಿಕವಾಗಿ ಬೊಧಿಸಿದರು ‌.
ಮಠದ ದಿವಾನರಾದ ಎಂ ರಘುರಾಮಾಚಾರ್ಯ , ಸಿ ಇ ಒ ಸುಬ್ರಹ್ಮಣ್ಯ ಭಟ್ ಮತ್ತು ಮಠದ ವಿದ್ಯಾರ್ಥಿಗಳು ಉಭಯ ಶ್ರೀಗಳವರನ್ನು ಆದರಿಂದ ಬರಮಾಡಿಕೊಂಡು ಭಕ್ತಿ ಗೌರವ ಸಮರ್ಪಿಸಿದರು .

ವಿದ್ವಾಂಸರಾದ ರಾಮಚಂದ್ರ ಭಟ್ ಗೋಪಾಲ ಜೋಯಿಸ್ , ಬಾಲಕೃಷ್ಣ ಭಟ್ ನೀರೆ , ಹೆರ್ಗ ಹರಿಪ್ರಸಾದ , ನರಸಿಂಹ ಭಟ್ , ವಿಧಾನ‌ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರೊ ಎಂ ಬಿ ಪುರಾಣಿಕ್ , ಮಾಜಿ ಶಾಸಕ ರಘುಪತಿ ಭಟ್ ಉಮೇಶ್ ರಾವ್ , ಮುರಲಿ ಕಡೆಕಾರ್ ಎಸ್ ವಿ ಭಟ್ ಗಂಗಾಧರ ರಾವ್ , ಪದ್ಮನಾಭ ಭಟ್ , ರಾಘವೇಂದ್ರ ಕಿಣಿ , ಮಠದ ಕೊಟ್ಟಾರಿ ಸಂತೋಷ ಭಟ್ , ವ್ಯವಸ್ಥಾಪಕ ಇಂದುಶೇಖರ , ವೇದವ್ಯಾಸ ಭಟ್ ಕೃಷ್ಣ ಸಾಮಗ , ಸುಬ್ರಹ್ಮಣ್ಯ ಹೆಬ್ಬಾರ್ ಮೊದಲಾದವರಿದ್ದರು . ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು ‌

spot_img

More articles

LEAVE A REPLY

Please enter your comment!
Please enter your name here