Friday, September 20, 2024

ಕುಂಜಿಬೆಟ್ಟು ವಾರ್ಡ್ 1 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ

Must read

ಉಡುಪಿ: ಕುಂಜಿಬೆಟ್ಟು ವಾರ್ಡಿನಲ್ಲಿ ನಗರಸಭಾ ನಿಧಿಯಿಂದ ಸುಮಾರು 1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ವಿವಿಧ ಕಾಮಗಾರಿಗಳನ್ನು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಉದ್ಘಾಟಿಸಿದರು.


ಬಳಿಕ ಮಾತನಾಡಿದ ಯಶ್ ಪಾಲ್ ಸುವರ್ಣ ಅವರು, ಕುಂಜಿಬೆಟ್ಟು ವಾರ್ಡಿನ ಕಟ್ಟೆ ಆಚಾರ್ಯ ಮಾರ್ಗ ಮರು ಡಾಂಬರೀಕರಣ 19 ಲಕ್ಷ ಅನುದಾನ ಒದಗಿಸಿದ್ದು ಶೀಘ್ರದಲ್ಲಿಯೇ ಕಾಮಗಾರಿ ಆರಂಭ ಗೊಳ್ಳಲಿದ್ದು, ವಾರ್ಡಿನ ಸಮಗ್ರ ಅಭಿವೃದ್ಧಿಗೆ ಶಾಸಕರ ನೆಲೆಯಲ್ಲಿ ಸಂಪೂರ್ಣ ಸಹಕಾರದ ಆಶಯ ವ್ಯಕ್ತಪಡಿಸಿದರು.

ನಗರ ಸಭಾ ಸದಸ್ಯರಾದ ಶ್ರೀ ಗಿರೀಶ್ ಅಂಚನ್, ಶ್ರೀಮತಿ ರಜನಿ ಹೆಬ್ಬಾರ್, ಪಕ್ಷದ ಪ್ರಮುಖರಾದ ಶ್ರೀಮತಿ ವೀಣಾ ಶೆಟ್ಟಿ, ಹರೀಶ್ ಶೇರಿಗಾರ್ ಬೈಲಕೆರೆ, ಶ್ರೀ ಮಂಜುನಾಥ ಹೆಬ್ಬಾರ್, ಸ್ಥಳೀಯರಾದ ಸುಪ್ರೀತ್ ಭಂಡಾರಿ, ಶರತ್ ಮಡಿವಾಳ, ಶ್ರೀ ಜಯಂತ್ ಕುಂದರ್, ವಿನಾಯಕ ಶೇಟ್, ಇಸ್ಮಾಯಿಲ್, ಸುಲೇಮಾನ್, ದೇವು ಪೂಜಾರಿ, ಶ್ರೀಮತಿ ಬೇಬಿ ಪುತ್ರನ್, ಶ್ರೀ ಬಾಲಕೃಷ್ಣ ನಾಯಕ್, ಶ್ರೀಧರ ಪೈ, ಶ್ರೀಮತಿ ವಿದ್ಯಾ ಶ್ಯಾಮ ಸುಂದರ್, ಡಾ ಸತೀಶ್ ರಾವ್, ಶ್ರೀಮತಿ ಸೀತಾ ಪೂಜಾರಿ, ಪ್ರದೀಪ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here